ಬೆಂಗಳೂರು (ಪಿಟಿಐ): ಮಾಹಿತಿ ಹಕ್ಕು ಕಾರ್ಯಕರ್ತ (ಆರ್ಟಿಐ) ಲಿಂಗರಾಜು ಹತ್ಯೆ ಪ್ರಕರಣದ ಆರೋಪಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯೆ ಗೌರಮ್ಮ ಅವರಿಗೆ ಇಲ್ಲಿನ ನಾಲ್ಕನೆಯ ತ್ವರಿತಗತಿ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಗೌರಮ್ಮ ಅವರು ಆಜಾದ್ ನಗರ ವಾರ್ಡ್ನ ಪ್ರತಿನಿಧಿ. ಅವರನ್ನು ಕಳೆದ ಡಿಸೆಂಬರ್ನಲ್ಲಿ ಬಂಧಿಸಲಾಗಿತ್ತು.
ಗೌರಮ್ಮ ಅವರು ್ಙ 1 ಲಕ್ಷ ಮೌಲ್ಯದ ಬಾಂಡ್ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.