ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಲ್ಯಾಣ ವಂತಿಗೆ ಪಾವತಿಗೆ ಸೂಚನೆ

Last Updated 8 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಚಾಮರಾಜನಗರ: ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ರ ವ್ಯಾಪ್ತಿಗೆ ಬರುವ ಎಲ್ಲ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಕಾರ್ಯಾಗಾರಗಳು, ಮೋಟಾರು ವಾಹನ ಸಂಸ್ಥೆಗಳ ಮಾಲೀಕರು ನೌಕರರ ಹಾಗೂ ಮಾಲೀಕರ ವಂತಿಗೆ ಪಾವತಿಸಬೇಕು ಎಂದು ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಸೂಚಿಸಿದೆ.

ಲಿಪಿಕ, ಗುತ್ತಿಗೆ, ತಾತ್ಕಾಲಿಕ, ಮೇಲ್ವಿಚಾರಣೆ ನೌಕರರು ಸೇರಿದಂತೆ ಪ್ರತಿ ಸಿಬ್ಬಂದಿಗೆ 6 ರೂ ಹಾಗೂ ಮಾಲೀಕರ ವಂತಿಗೆ 12 ರೂ ಸೇರಿದಂತೆ ಒಟ್ಟು 18 ರೂ ವಂತಿಗೆಯನ್ನು ಅಧಿನಿಯಮ 7ಎ ಪ್ರಕಾರ ಫಾರಂ `ಡಿ~ ನಮೂನೆಯೊಂದಿಗೆ ಕಡ್ಡಾಯವಾಗಿ ಪಾವತಿಸಬೇಕಿದೆ.

50 ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು (ಬೌದ್ಧಿಕ ಕೆಲಸ ಮಾಡುವ ಎ್ಲ್ಲಲ ನುರಿತ ನೌಕರರು ಹಾಗೂ ಆಡಳಿತ ವರ್ಗದ ನೌಕರರು) ನೇಮಿಸಿಕೊಂಡ ಎ್ಲ್ಲಲ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಚಾರಿಟಬಲ್ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾದ ಎ್ಲ್ಲಲ ಸಂಘ-ಸಂಸ್ಥೆಗಳ ಮಾಲೀಕ ವರ್ಗದವರು ಕಡ್ಡಾಯವಾಗಿ ಕಾರ್ಮಿಕ ಮತ್ತು ಮಾಲೀಕರ ವಂತಿಗೆ ಪಾವತಿಸಬೇಕಿದೆ.

ಅಧಿನಿಯಮ 7ರ ಪ್ರಕಾರ ಕಾರ್ಮಿಕರಿಗೆ ಪಾವತಿಯಾಗದೆ ಇರುವ ಬಾಕಿ ವೇತನ ಹಾಗೂ ಇತರೇ ಭತ್ಯೆಗಳು, ಬೋನಸ್ ಮತ್ತು ದಂಡದ ರೂಪದಲ್ಲಿ ವಸೂಲು ಮಾಡಿ ಸಂಗ್ರಹಿಸಿರುವ ಮೊತ್ತ ಸೇರಿ ಕಡ್ಡಾಯವಾಗಿ ಕಲ್ಯಾಣ ಮಂಡಳಿಗೆ ಪಾವತಿಸಬೇಕಿದೆ.

ಈ ಅಧಿನಿಯಮ ಉಲ್ಲಂಘಿ ಸಿ ವಿಳಂಬವಾಗಿ ವಂತಿಗೆ ಪಾವತಿಸುವ ಮಾಲೀಕ ವರ್ಗದವರು ವಂತಿಗೆ ಮೊತ್ತ ಹಾಗೂ ಕಾರ್ಮಿಕರಿಗೆ ಪಾವತಿ ಮಾಡದೆ ಇರುವ ಮೊತ್ತಕ್ಕೆ(ಅನ್‌ಪೇಯ್ಡ ಅಕ್ಯುಮುಲೇಷನ್) ಅನುಗುಣವಾಗಿ ಶೇ. 18ರಷ್ಟು ಬಡ್ಡಿ ಭರಿಸಬೇಕಾ ಗುತ್ತದೆ ಎಂದು ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗುತ್ತದೆ. ಕನಿಷ್ಠ 500 ರೂಗಳಿಂದ 1,000 ರೂ ದಂಡ ಹಾಗೂ ಮೂರು ತಿಂಗಳಿಂದ ಒಂದು ವರ್ಷದವರೆವಿಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಪಾವತಿಸಬೇಕಾದ ವಂತಿಗೆ ಹಾಗೂ ಕಾರ್ಮಿಕರು ಸ್ವೀಕರಿಸದೆ, ಪಾವತಿಯಾಗದೆ ಬಾಕಿ ಇರುವ ಮೊತ್ತವನ್ನು ಜ. 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಲ್ಯಾಣ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಭವನ, ನಂ. 48, 2ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ(ಆರ್‌ಟಿಒ ಕಚೇರಿ ಹತ್ತಿರ), ಯಶವಂತಪುರ, ಬೆಂಗಳೂರು- 22 ಅಥವಾ ದೂರವಾಣಿ ಸಂಖ್ಯೆ 080-23570266 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT