ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಗಣೇಶನ ವಿಸರ್ಜಿಸಲು ಮುಂಜಾಗ್ರತ ಕ್ರಮವಾಗಿ ಗುತ್ತಿಗೆ ನೌಕರರನ್ನು ಕೆರೆಯ ಬಳಿ ನಿಯೋಜಿಸಿದ್ದರು. ಅದರಂತೆ ಶಿವು, ಯಲ್ಲಪ್ಪ, ನಾರಾಯಣಪ್ಪ, ಮಂಜು ಮತ್ತು ಮಂಜುನಾಥ ಎಂಬುವರು ಕೆರೆಯ ಸೇತುವೆ ಬಳಿ ನೀರಿಗಿಳಿದು ಸಹಕರಿಸಿದ್ದಾರೆ.
ನೀರಿನ ರಭಸಕ್ಕೆ ಸಿಲುಕಿದ ಐದು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಅಲ್ಲಿದ್ದ ಕೆಲ ಯುವಕರು ಹಗ್ಗದ ಸಹಾಯದಿಂದ ಶಿವು,ಯಲ್ಲಪ್ಪ ಮತ್ತು ನಾರಾಯಣಪ್ಪ ಅವರನ್ನು ಪಾರು ಮಾಡಲು ಯಶಸ್ವಿ ಆದರೂ ನಾರಾಯಣಪ್ಪ ಎಂಬುವನಿಗೆ ತೀವ್ರ ಗಾಯಗಳಾದ ಕಾರಣ ಅವರನ್ನು ವರ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು ಮಂಜುನಾಥ ಮತ್ತು ಮಂಜು ಎಂಬುವರು ಮಾತ್ರ ನೀರು ಪಾಲಾಗಿದ್ದು ಅಗ್ನಿಶಾಮಕ ತಂಡ ಶೋಧ ಕಾರ್ಯ ನಡೆಸುತ್ತಿದೆ.