ಮಾರುತಿ ಜೆಡಿ ನಿರ್ಮಾಣದ `ಕಾಲಾಯ ತಸ್ಮೈ ನಮಃ~ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದು, ಎರಡು ಗೀತೆಗಳ ಚಿತ್ರೀಕರಣ ಬಾಕಿ ಇದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹಾಗೂ ನಿರ್ದೇಶನ ಚಂದ್ರಶೇಖರ ಶ್ರಿ ವಾತ್ಸವ್ ಅವರದು.
ಸಂಗೀತ ಎ.ಎಂ.ನೀಲ್, ಛಾಯಾಗ್ರಹಣ ಸಿನಿಟೆಕ್ ಸೂರಿ, ಸಂಕಲನ ಎಸ್. ಸೌಂದರ್ ರಾಜ್, ಸಾಹಸ ಡಿಫರೆಂಟ್ ಡ್ಯಾನಿ, ಕಲೆ ಶ್ರಿನಿವಾಸ್, ನಿರ್ವಹಣೆ ಅಚ್ಚುತರಾವ್. ತಾರಾಗಣದಲ್ಲಿ ಯೋಗೀಶ್, ಮಧುಬಾಲಾ, ರಂಗಾಯಣ ರಘು, ರವಿಕಾಳೇ, ರಾಜು ತಾಳಿಕೋಟೆ, ಶಂಕರ್ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ, ಜಯಸಿಂಹ ಮುಸುರಿ, ಭಾಸ್ಕರ್ ಪಾಂಡವಪುರ ಇದ್ದಾರೆ.