ವಿಜಾಪುರ: ಉಪನ್ಯಾಸಕಿಯೊಬ್ಬರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನವರು ಗುರುವಾರ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಬಂದ್ ಮಾಡಿ, ಧರಣಿ ನಡೆಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ದು ಮದರಖಂಡಿ ಮಾತನಾಡಿ, ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯುತ್ ವಿಭಾಗದ ಉಪನ್ಯಾಸಕಿ 1, 3, 5ನೇ ಸೆಮಿಸ್ಟರ್ನ ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಿದ್ದಾರೆ. ಉಪನ್ಯಾಸಕಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
`ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮವಾಗುವಂತೆ ಮಾಡುತ್ತೇನೆ~ ಎಂದು ಕಾಲೇಜಿನ ಪ್ರಾಚಾರ್ಯ ಮುಜಗೊಂಡ ಭರವಸೆ ನೀಡಿದರು. ವಿದ್ಯಾರ್ಥಿಗಳು ನಂತರ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಬಿ.ಎಸ್., ಸುರೇಶ ಮಾಳಶೆಟ್ಟಿ, ದಿಗ್ವಿಜಯ, ವಿನೋದ, ರಮೇಶ, ಅಶ್ವಿನ್ಕುಮಾರ, ಸಚೀನ್, ಸುಧಾ, ನಿರ್ಮಲಾ, ಅಶ್ವಿನಿ, ರೂಪ, ಗಿರೀಶ, ಚಿದಾನಂದ, ಮಲ್ಲಿಕಾರ್ಜುನ, ಶ್ರಿಕಾಂತ, ಅರುಣ ಶಿರಗೂರ, ರಮೇಶ. ಯಡಹಳ್ಳಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.