ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, `ನೀರಿನ ಕೊರತೆಯಿಂದಾಗಿ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು 12 ಟಿಎಂಸಿ ಅಡಿ ನೀರು ಬೇಕು. ಅದಲ್ಲದೇ ಉಳಿದ ಭಾಗಗಳ ಕುಡಿಯುವ ನೀರಿನ ಪೂರೈಕೆಗೆ 20 ಟಿಎಂಸಿಗೂ ಅಧಿಕ ನೀರು ಬೇಕು. ಈಗಾಗಲೇ ಕೈಗೊಂಡಿರುವ ಬೆಳೆಗೂ ನೀರಿನ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್ನಲ್ಲಿ ರಾಜ್ಯವೂ ಈ ಬಗ್ಗೆ ಬಲವಾದ ವಾದ ಮಂಡಿಸಲಿದೆ' ಎಂದರು.