ನವದೆಹಲಿ (ಪಿಟಿಐ): `ನಾನು ಕಾಶ್ಮೀರವನ್ನು ಆಯ್ಕೆ ಮಾಡಿಲ್ಲ. ಕಾಶ್ಮೀರ ನನ್ನನ್ನು ಆಯ್ಕೆ ಮಾಡಿದೆ'.
ಹೀಗೆ ಹೇಳಿದವರು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತಕ್ಕೆ ಹೆಸರಾದ ಭಾರತೀಯ ಮೂಲದ ಜುಬಿನ್ ಮೆಹ್ತಾ.
`ಕಾರ್ಯಕ್ರಮವನ್ನು ವಿರೋಧಿಸುತ್ತಿರುವ ಪ್ರತ್ಯೇಕತಾವಾದಿಗಳ ಬಗ್ಗೆ ನಾನು ಏನೂ ಹೇಳಲಾರೆ. ನಾವು ಸಂಗೀತ ಮಾತ್ರ ನುಡಿಸುತ್ತೇವೆ' ಎಂದು ಜುಬಿನ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಪ್ರಣವ್ ಮುಖರ್ಜಿ ಅವರಿಂದ ಕೋಮು ಸೌಹಾರ್ದಕ್ಕಾಗಿ ನೀಡಲಾಗುವ ಟ್ಯಾಗೋರ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.