ಶ್ರೀನಗರ, (ಐಎಎನ್ಎಸ್): ಹುರಿಯತ್ ಕಾನ್ಫರೆನ್ಸ್ ಮಂಗಳವಾರ ನೀಡಿದ್ದ ಬಂದ್ ಕರೆಯಿಂದ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಭಾಗಶಃ ಅಸ್ತವ್ಯಸ್ತವಾಗಿತ್ತು.
ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರಿಪಡಿಸಲು ಕಾನ್ಫರೆನ್ಸ್ನ ನಾಯಕ ಸೈಯದ್ ಅಲಿ ಷಾ ಗಿಲಾನಿ ಅವರನ್ನು ದೆಹಲಿ ಬಿಟ್ಟು ತೆರಳದಂತೆ ಅಲ್ಲಿನ ಪೊಲೀಸರು ನಿರ್ಬಂಧ ಹೇರಿದ್ದನ್ನು ಖಂಡಿಸಿ ಬಂದ್ ಕರೆ ನೀಡಲಾಗಿತ್ತು.