ಬಡರೋಗಿಗಳಿಗೆ ಆಶಾಕಿರಣವಾಗಬೇಕಿದ್ದ ಕಿದ್ವಾಯಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಮೂರು ನಾಲ್ಕು ತಿಂಗಳು ಕಳೆದರೂ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ.
ರೋಗಿಗಳನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಿ ತಿಂಗಳುಗಟ್ಟಲೆ ಕಾಯಿಸಿ ಚಿಕಿತ್ಸೆಗೆ ದಿನ ನಿಗದಿ ಮಾಡುತ್ತಾರೆ. ರೋಗಿಗಳಿಗೆ ಸಂಬಂಧಿಸಿದ ಫೈಲುಗಳನ್ನು ಹುಡುಕಿಸುವುದೇ ದೊಡ್ಡ ಸಾಹಸ.
ರೇಡಿಯೋಥೆರಪಿ ವಿಭಾಗದಲ್ಲಿ ಗಂಟೆಗಟ್ಟಲೆ ಕಾಯ್ದರೂ ಚಿಕಿತ್ಸೆ ಸಿಗುವುದಿಲ್ಲ. ಅಲ್ಲಿನ ಸಿಬ್ಬಂದಿ ಹಣ ನಿರೀಕ್ಷಿಸುತ್ತಾರೆ. ಹಣ ಕೊಟ್ಟವರಿಗೆ ಮೊದಲ ಆದ್ಯತೆ. ಸಾವಿನ ಆತಂಕದಲ್ಲಿ ದಿನದೂಡುವ ಬಡರೋಗಿಗಳನ್ನು ಕೇಳುವವರೇ ಇಲ್ಲ. ಈ ಹಿಂಸೆಯ ಪಡಿಪಾಟಲು ಅನುಭವಿಸಿದವರಿಗೇ ಗೊತ್ತು.