ಸರವಣ ಮೂರ್ತಿ ನಿರ್ಮಿಸುತ್ತಿರುವ ‘ಕಿರಾತಕ’ ಚಿತ್ರಕ್ಕೆ ಡಿ.ಟಿ.ಎಸ್. ಕಾರ್ಯ ಪೂರ್ಣಗೊಂಡಿತು. ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಈ ಚಿತ್ರದ ಚಿತ್ರಕಥೆ, ನಿರ್ದೇಶನ, ಪ್ರದೀಪ್ ರಾಜ್ ಅವರದ್ದು. ಆರ್.ಸೆಲ್ವ ಛಾಯಾಗ್ರಹಣ, ಬಿ.ಎ.ಮಧು ಸಂಭಾಷಣೆ, ವಿ.ಮನೋಹರ್ ಸಂಗೀತ, ಪಳನಿವೇಲು ಸಂಕಲನವಿದೆ. ಹೊಸಮನೆ ಮೂರ್ತಿ ಕಲಾ ನಿರ್ದೇಶನದ ಈ ಚಿತ್ರವು ಎರಡು ಹಳ್ಳಿಗಳ ನಡುವೆ ನಡೆಯುವ ಪ್ರೇಮಕಥೆಯನ್ನು ಒಳಗೊಂಡಿದೆ. ಯಶ್, ಓಹಿಯಾ, ತಾರಾ, ನಾಗಾಭರಣ, ಸಂಕೇತ್ ಕಾಶಿ ಮುಂತಾದವರು ಅಭಿನಯಿಸಿದ್ದಾರೆ.