ನವದೆಹಲಿ: ಬಿಜೆಪಿ ನಾಯಕ ಹಾಗೂ ಸಂಸದ ಪ್ರಕಾಶ್ ಜಾವಡೇಕರ್ ಸೇರಿದಂತೆ ಆ ಪಕ್ಷದ ಮೂವರು ನಾಯಕರು ಸೋಮವಾರ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಪತ್ರಕರ್ತರೊಬ್ಬರು ನಡೆಸಿದ ಕುಟುಕು ಕಾರ್ಯಾಚರಣೆ ಸುಳಿಗೆ ಸಂಸದರು ಮತ್ತು ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ ಜಾವಡೇಕರ್, ಭೂಪೇಂದ್ರ ಯಾದವ್ ಮತ್ತು ರಾಮ್ ಲಾಲ್ ಅವರು ಬಿದ್ದಿದ್ದಾರೆ.
ನಕಲಿ ಎನ್ಕೌಂಟರ್ ಪ್ರಕರಣದಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತ ನರೇಂದ್ರ ಶಹಾ ಅವರನ್ನು ಹೊರತರಲು ಈ ಮೂವರು ಯತ್ನಿಸಿದ್ದರು.