ಕೆಂಗೇರಿ 3ನೇ ಮುಖ್ಯರಸ್ತೆಗೆ ಸರಬರಾಜಾಗುತ್ತಿರುವ ಕಾವೇರಿ ನೀರಿನಲ್ಲಿ ಹಾನಿಕಾರಕ ರಾಸಾಯನಿಕ ಇದೆ. ಬಿಳಿ ಬಣ್ಣದಿಂದ ಇರುವ ನೀರು ಕುಡಿದರೆ ಆರೋಗ್ಯ ಕೆಡಬಹುದು. ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿ ವಿನಂತಿ.
ಅಪಾಯಕಾರಿ ವಿದ್ಯುತ್ ತಂತಿ
ಪೀಣ್ಯ 2ನೇ ಹಂತದ ಕರೀಂ ಸಾಹೇಬ್ ಹೆಗ್ಗನಹಳ್ಳಿ ಬಳಿ ವಿದ್ಯುತ್ ತಂತಿಗಳು ಇಳಿ ಬಿದ್ದು ಜೋತಾಡುತ್ತಿವೆ.