ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸುವ ಈ ಮರಾಕಲ್ ಯೋಜನೆಯ ನೀರಿನ ಪೈಪ್ನ್ನು ರಾಷ್ಟ್ರೀಯ ಹೆದ್ದಾರಿಯ ಗುಂಟ ಅಳವಡಿಸಲಾಗಿದ್ದು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಡಿಕ್ಕಿಯಿಂದಾಗಿ ಈ ಪೈಪ್ ಒಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಅಪಘಾತದಲ್ಲಿ ಒಂದೆಡೆ ಒಡೆದಿರುವ ಪೈಪ್ ಆಸುಪಾಸಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಕೆಲಮಟ್ಟಿಗೆ ನಿವಾರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪೈಪ್ ಒಡೆಯುತ್ತಿರಲಿ ಎಂಬುದೂ ಇವರ ಒಳಗಿನ ಆಶಯ!