ವಿದ್ಯಾಮಾನ್ಯನಗರ, ಓಂಕಾರನಗರ ಹಾಗೂ ರಾಘವೇಂದ್ರನಗರದಲ್ಲಿ ಕುಡಿಯುವ ನೀರು ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಕೆಲ ಬಡ ನಿವಾಸಿಗಳು ನೀರು ಕೊಂಡು ಜೀವಿಸುವುದಾದರೂ ಹೇಗೆ? ಬಿಬಿಎಂಪಿ ಅಧಿಕಾರಿಗಳು ಮೊದಲಿನಂತೆ ವಾರಕ್ಕೆರಡು ಸಲ ನೀರು ಸರಬರಾಜು ಮಾಡುವ ಏರ್ಪಾಡು ಮಾಡಲು ಬೇಡಕೊಳ್ಳುತ್ತೇನೆ.