ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕ ಚಾಲಕನಿಗೆ ದೇವಸ್ಥಾನದ ಸೇವೆಯ ಶಿಕ್ಷೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮದ್ಯಪಾನ ಸೇವಿಸಿ ಚಾಲನೆ ಮಾಡಿದ ಯುವಕನೊಬ್ಬನಿಗೆ ಶಿಕ್ಷೆ ರೂಪದಲ್ಲಿ 2 ತಿಂಗಳ ಕಾಲ ದೇವಸ್ಥಾನದಲ್ಲಿ ಸಮುದಾಯ ಸೇವೆ  ಮಾಡಬೇಕೆಂದು ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.

ಇಲ್ಲಿನ ಹೆಚ್ಚುವರಿ ಸೆಷನ್ ನ್ಯಾಯಾಧೀಶ ವೀರೇದ್ರ ಭಟ್ ಈ ತೀರ್ಪು ನೀಡಿದ್ದು, ಜೈಲು ಶಿಕ್ಷೆಯ ಬದಲು ಸಮುದಾಯ ಸೇವೆಯಲ್ಲಿ ತೊಡಗುವಂತೆ ಯುವಕನಿಗೆ ಆದೇಶಿಸಲಾಗಿದೆ. `ಪ್ರದೀಪ್ ಅವಿವಾಹಿತನಾಗಿದ್ದು, ವಯಸ್ಸಾದ ಪೋಷಕರನ್ನು ಹೊಂದಿದ್ದಾನೆ.

ಯುವಕನಿಗೆ ಜೈಲುಶಿಕ್ಷೆ ವಿಧಿಸಿದರೆ ಭವಿಷ್ಯದಲ್ಲಿ ಕಪ್ಪುಚುಕ್ಕೆಯಾಗುತ್ತದೆ, ಕುಟುಂಬದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ತೀರ್ಪು ನೀಡಲಾಗಿದೆ~ ಎಂದು ಕೋರ್ಟ್ ಹೇಳಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT