ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ದಂಪತಿಗೆ ಸಮನ್ಸ್ ಜಾರಿ

Last Updated 8 ಆಗಸ್ಟ್ 2011, 9:05 IST
ಅಕ್ಷರ ಗಾತ್ರ

ಬೆಂಗಳೂರು(ಪಿಟಿಐ):  ಕಾನೂನು ಗಾಳಿಗೆ ತೂರಿ ಖಾಸಗಿ ಕಂಪನಿಗೆ ಗಣಿಗಾರಿಕೆಗೆ ಮತ್ತು  ಖಾಸಗಿ ಹೌಸಿಂಗ್ ಸೊಸೈಟಿಗೆ ಕಾನೂನು ಉಲ್ಲಂಘಿಸಿ ಭೂಮಿ ಮಂಜೂರು ಮಾಡಿದ  ಪ್ರಕರಕಣ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಇತರ ಇಬ್ಬರಿಗೆ  ಲೋಕಾಯುಕ್ತ ನ್ಯಾಯಾಲಯ  ಸೋಮವಾರ ಸಮನ್ಸ್ ಜಾರಿ ಮಾಡಿದ್ದು ಆಗಸ್ಟ್ 30ರೊಳಗೆ ಹಾಜಾರುಗುವಂತೆ ಆದೇಶಿಸಿದೆ.

ಕುಮಾರಸ್ವಾಮಿ ಅವರು, ಕಾನೂನು ಉಲ್ಲಂಘಿಸಿ ಜಂತಕಲ್ ಕಂಪನಿಗೆ ಮೈನಿಂಗ್ ಲೈಸೆನ್ಸ್  ನೀಡಿದ್ದಾರೆ, ಖಾಸಗಿ ಹೌಸಿಂಗ್  ಸೊಸೈಟಿಗೆ ಭೂಮಿ ಮಂಜೂರು ಮಾಡಿದ್ದಾರೆಂದು  ಆರೋಪಿಸಿ ವಕೀಲ ವಿನೋದ್ ಕುಮಾರ್ ಅವರು ಖಾಸಗಿ ದೂರು ದಾಖಲಿಸಿದ್ದರು.

ಈ ದೂರನ್ನು ಆಲಿಸಿದ ವಿಶೇಷ ನ್ಯಾಯಾಧೀಶರಾದ ಸುಧೀಂದರ್ ರಾವ್ ಅವರು ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಜಂತಕಲ್ ಎಂಟರ್ ಪ್ರೈಸಸ್ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT