ಕಂಪ್ಲಿ, ಕುರುಗೋಡು ಮತ್ತು ಕೋಳೂರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ನನ್ನ ಸಮಾಜ ಸೇವೆಗೆ ಮನಸೋತ ನೂರಾರು ಯುವಕರು ನನ್ನನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ ಎಂದರು.
ಡಾ.ವೀರೇಂದ್ರರೆಡ್ಡಿ, ಕೇಶವರೆಡ್ಡಿ, ರಾಮಾನಾಯ್ಡು, ನೆಲ್ಲುಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕರಿಬಸವನಗೌಡ, ಎಮ್ಮಿಗನೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಖಾಜಾಸಾಬ್, ರಾಜ್, ನೂರ್, ಸಂತೋಷ್ ಉಪಸ್ಥಿತರಿದ್ದರು.
ಸುರೇಶ್ಬಾಬು ಮತ ಯಾಚನೆ
ಕಂಪ್ಲಿ: ಕಂಪ್ಲಿ ವಿಧಾನಸಭಾಕ್ಷೇತ್ರ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಟಿ.ಎಚ್. ಸುರೇಶ್ಬಾಬು ಭಾನುವಾರ ಪಟ್ಟಣದ ವಿವಿಧೆಡೆ ಮನೆಗಳಿಗೆ ತೆರಳಿ ಮತ ಯಾಚಿಸಿದರು.
ಕಂಪ್ಲಿ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವು ದರ ಜೊತೆಗೆ ಕಂಪ್ಲಿ ಮತ್ತು ಕುರುಗೋಡು ಪಟ್ಟಣಗಳನ್ನು ನೂತನ ತಾಲ್ಲೂಕು ಕೇಂದ್ರಗಳಾಗಿ ಘೋಷಿಸು ವಲ್ಲಿ ಶ್ರಮಿಸಿರುವೆ ಎಂದು ಅವರು ಹೇಳಿ ಮತ ನೀಡಲು ಕೋರಿದರು.