ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಈಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಈ ಸುದ್ದಿಯ ಸರಣಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.
ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ಪ್ರೊಫೆಸರೊಬ್ಬರು ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ತಾವು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎಂದು ಬರೆದುಕೊಂಡಿದ್ದಾರೆ. ಹಾಲಿ ಬಯೋಟೆಕ್ನಾಲಜಿ ವಿಭಾಗದ ಪ್ರೊ.ಕೃಷ್ಣ ವೆಂಕಟರಂಗಯ್ಯ ತಾವು ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಮ್ಮ ವೈಯಕ್ತಿಕ ವಿವರಣೆಯಲ್ಲಿ ಬರೆದುಕೊಂಡಿದ್ದಾರೆ.
ಈಗಾಗಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಬ್ಬರು ಕುಲಸಚಿವರಿದ್ದಾರೆ. ಒಬ್ಬರು ಆಡಳಿತ, ಮತ್ತೊಬ್ಬರು ಪರೀಕ್ಷಾಂಗ. ಇವರನ್ನು ಬಿಟ್ಟು ಇನ್ನೂ ಯಾರಿವರು ಎಂದು ಫೇಸ್ಬುಕ್ ನೋಡುಗರು ಗೊಂದಲಕ್ಕೆ ಒಳಗಾಗಿದ್ದಾರೆ.
ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ (ಕೂಟ) ಅಧ್ಯಕ್ಷರೂ ಆಗಿರುವ ಕೃಷ್ಣ ವೆಂಕಟರಂಗಯ್ಯ ಅವರು ಯಾವಾಗ ಕುಲಸಚಿವರಾದರು ಎಂಬ ಪ್ರಶ್ನೆ ಈಗ ವಿಶ್ವವಿದ್ಯಾಲಯದ ಆವರಣದಲ್ಲಿ ಚರ್ಚೆಯ ವಿಷಯವಾಗಿದೆ.