ಜಮಖಂಡಿ: ದಾವಣಗೆರೆಯ ಕಾರ್ತಿಕ ಕಾಟೆ ಅವರು ರಾಜ್ಯೋತ್ಸವ ಅಂಗವಾಗಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ `ಕನ್ನಡ ಸಂಘ ಕೇಸರಿ' ಪ್ರಶಸ್ತಿ ಪಡೆದರೆ, ವೆಂಕಟೇಶ ಡಿ `ಕನ್ನಡ ಸಂಘ ಬಾಲ ಕೇಸರಿ' ಪ್ರಶಸ್ತಿ ಹಾಗೂ ಹರಿಯಾಣದ ಮನ್ದೀಪ್ ಡೋಲು `ಭಾರತ ಮಲ್ಲ ಸಾಮ್ರಾಟ' ಪ್ರಶಸ್ತಿಗೆ ಭಾಜನರಾದರು.
74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ದಾವಣಗೆರೆಯ ಕಾರ್ತಿಕ ಕಾಟೆ ಬೆಳಗಾವಿಯ ಪಾಂಡು ಶಿಂಧೆ ಅವರನ್ನು ಚಿತ್ ಮಾಡಿದರು. ಕನ್ನಡ ಸಂಘ ಬಾಲ ಕೇಸರಿ ಪ್ರಶಸ್ತಿಗಾಗಿ 50 ಕೆಜಿ ವಿಭಾಗದಲ್ಲಿ ನಡೆದ ಸೆಣಸಾಟದಲ್ಲಿ ದಾವಣಗೆರೆಯ ವೆಂಕಟೇಶ ಡಿ. ಧಾರವಾಡದ ಮಂಜುನಾಥ ಡಿ ಅವರನ್ನು ಸೋಲಿಸಿದರು.