ಬೆಂಗಳೂರು: ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಹಿರಿಯ ಶಂಕರಾಚಾರ್ಯ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ ಅವರ 93ನೇ ಜನ್ಮದಿನದ ವಿಶೇಷ ಕಾರ್ಯಕ್ರಮಗಳು ಶಿವಮೊಗ್ಗ ಸಮೀಪದ ಕೂಡಲಿ ಕ್ಷೇತ್ರದಲ್ಲಿ ಇದೇ 8ರಂದು ನಡೆಯಲಿವೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಚಾರಗೋಷ್ಠಿಗಳೂ ನಡೆಯಲಿವೆ. ವಿವಿಧ ರಾಜ್ಯಗಳ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.