ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಲೋಕಾರ್ಪಣೆ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಲವ್ ಸೈಕಾಲಜಿ
ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆ, ಕರ್ನಾಟಕ ಲೈಂಗಿಕ ವಿಜ್ಞಾನ ಅಕಾಡೆಮಿ: ಭಾನುವಾರ ಡಾ.ಸಿ.ಶರತ್ ಕುಮಾರ್ ಅವರಿಂದ ‘ಗರ್ಭಧಾರಣೆಯ ತೊಂದರೆಗಳು, ಸ್ತ್ರೀ ಪುರುಷರಲ್ಲಿ ಬಂಜೆತನ ಕಾರಣ- ಪರಿಹಾರ, ಆಪ್ತಸಲಹೆ ಹೇಗೆ ನೀಡಬೇಕು’ ಕುರಿತು ಉಪನ್ಯಾಸ. ನಂತರ ಎನ್.ವಿಶ್ವರೂಪಾಚಾರ್ ಬರೆದಿರುವ ‘ಲವ್ ಸೈಕಾಲಜಿ’ ಮತ್ತು ‘ಆರೋಗ್ಯ ಜೀವನ: ಜೀವನ ಆರೋಗ್ಯ ಲೈಂಗಿಕತೆ’ ಕೃತಿಗಳ ಲೋಕಾರ್ಪಣೆ. ಅತಿಥಿ: ಡಾ.ಪ್ರಕಾಶ್ ಸಿ.ರಾವ್.ಸ್ಥಳ: ಸ್ಪಂದನ ಹಾಸ್ಪಿಟಲ್, ನಾಯಂಡಹಳ್ಳಿ (ಪಂತರಪಾಳ್ಯ). ಬೆಳಿಗ್ಗೆ 12.

ತಾಯಿಗೂಡು
ಮನೀಶ್ ಪ್ರಕಾಶನ: ಭಾನುವಾರ ಸಿ.ಕೆ.ರಾಮೇಗೌಡ ಅವರಿಂದ ಸತೀಶ್ ನಿಂಗೇಗೌಡರ ಚೊಚ್ಚಲ ಕವನ ಸಂಕಲನ ‘ತಾಯಿ ಗೂಡು’ ಲೋಕಾರ್ಪಣೆ. ಅತಿಥಿ: ಬಿ.ಟಿ. ಚಿಕ್ಕಪುಟ್ಟೇಗೌಡ್ರು. ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಚಾಮರಾಜಪೇಟೆ. ಮಧ್ಯಾಹ್ನ 3.30.


ಅಕ್ಕರದಿ ಅಕ್ಕರ
ಕಾಗಿನೆಲೆ ಬಂಧುಗಳು ಹಾಗೂ ಹಳೇ ವಿದ್ಯಾರ್ಥಿ ಸಂಘ, ಸರ್ಕಾರಿ ಪ್ರೌಢಶಾಲೆ: ಭಾನುವಾರ ಕೆ.ಪುರುಷೋತ್ತಮ ಅವರ ‘ಅಕ್ಕರದಿ ಅಕ್ಕರ’ ಕೃತಿ ಲೋಕಾರ್ಪಣೆ. ಸಾನ್ನಿಧ್ಯ: ಜಯೇಂದ್ರ ಪುರಿ ಸ್ವಾಮೀಜಿ, ಅತಿಥಿಗಳು: ಕೆ.ಶ್ರೀಕಂಠೇಶ್ವರ, ಎಸ್.ಸತ್ಯನಾರಾಯಣ್. ಸ್ಥಳ: ಕನ್ನಡ ಸಾಹಿತ್ಯ ಸಂಘ, ಚಾಮರಾಜಪೇಟೆ, ಬೆಳಿಗ್ಗೆ 10.

ದೃಶ್ಯ
ಥಿನ್‌ಲೈನ್ ಪಬ್ಲಿಕೇಷನ್ಸ್: ಸೋಮವಾರ ಡಾ.ಅಜಯ್‌ಕುಮಾರ್ ಸಿಂಗ್ ಅವರಿಂದ ಕಲಾವಿದ ಡಾ.ಎಂ.ಎಸ್.ಮೂರ್ತಿ ಅವರ ‘ದೃಶ್ಯ’ ವಿನೂತನ ಕಾದಂಬರಿ ಲೋಕಾರ್ಪಣೆ. ಅತಿಥಿಗಳು: ಎಸ್.ಜಿ.ವಾಸುದೇವ್. ಅಧ್ಯಕ್ಷತೆ : ಡಾ.ಯು.ಆರ್.ಅನಂತ ಮೂರ್ತಿ. ಸ್ಥಳ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5.30.

...ಪ್ರೀತಿ ಕಾಮವಲ್ಲ
ಅಜ್ಜೀಪುರ ಪ್ರಕಾಶನ: ಶನಿವಾರ ರವಿ ಬೆಳಗೆರೆ ಅವರಿಂದ ರವಿ ಅಜ್ಜೀಪುರ ಅವರ ‘ನೆನಪಿರಲಿ ಪ್ರೀತಿ ಕಾಮವಲ್ಲ ‘ ಪುಸ್ತಕ ಲೋಕಾರ್ಪಣೆ. ಕೃತಿ ಕುರಿತು: ಶಶಿಕಲಾ ವೀರಯ್ಯಸ್ವಾಮಿ, ಅತಿಥಿಗಳು: ಚಿತ್ರ ನಿರ್ದೇಶಕ ಗುರುಪ್ರಸಾದ್, ಎಸ್. ರವಿಕುಮಾರ್. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT