ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಲೋಕಾರ್ಪಣೆ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಕ್ಕಳ ನಾಟಕ
ಕರ್ನಾಟಕ ನಾಟಕ ಅಕಾಡೆಮಿ, ಭಾಗ್ಯಲಕ್ಷ್ಮಿ ಪ್ರಕಾಶನ ಮತ್ತು ಕಲಾಗಂಗೋತ್ರಿ: ಸೋಮವಾರ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ 100 ಮಕ್ಕಳ ನಾಟಕಗಳ (61ವಿವಿಧ ಲೇಖಕರ 15 ಸಂಪುಟಗಳು) ಲೋಕಾರ್ಪಣೆ. (ಸಂಪಾದಕ: ಬಿ.ವಿ. ರಾಜಾರಾಂ). ರಮೇಶ್ ಬಿ. ಝಳಕಿ ಅವರಿಂದ ಉದ್ಘಾಟನೆ ಮತ್ತು ರಾಗಸಂಗೀತ ಸೀಡಿ ಲೋಕಾರ್ಪಣೆ. ಅತಿಥಿಗಳು: ಡಾ. ನಲ್ಲೂರು ಪ್ರಸಾದ್. ಅಧ್ಯಕ್ಷತೆ:  ಡಾ. ಮುಖ್ಯಮಂತ್ರಿ ಚಂದ್ರು.

ನಂತರ ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ ನಾಟಕ ತಂಡದಿಂದ `ಪಾಠ ನಾಟಕ~ ನಾಟಕ ಪ್ರದರ್ಶನ (8,9 ಹಾಗೂ 10ನೇ ತರಗತಿಗಳ ಪಠ್ಯಗಳ ಆಯ್ದಭಾಗಗಳು). ರಚನೆ: ಐ.ಕೆ. ಬೋಳುವಾರು. ನಿರ್ದೇಶನ: ಮೌನೇಶ್ ವಿಶ್ವಕರ್ಮ. ಇದು ಈ ತಂಡದ 25ನೇ ಪ್ರದರ್ಶನ.

ನಾಟಕದ ನಂತರ 100ನಾಟಕಗಳ ಕುರಿತು ಲೇಖಕರೊಂದಿಗೆ ಸಂವಾದ. ಸಂಜೆ 7ಕ್ಕೆ ವಿಜಯನಗರ ಬಿಂಬ ಮಕ್ಕಳ ನಾಟಕ ತಂಡದಿಂದ `ಯಾವ ಪುಟಾಣಿ ಹುಡುಗ~ ನಾಟಕ ಪ್ರದರ್ಶನ (ರಚನೆ: ಪ್ರೊ.ಬಿ. ಚಂದ್ರಶೇಖರ. ನಿರ್ದೇಶನ: ಡಾ.ಎಸ್.ವಿ. ಕಶ್ಯಪ್).
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಳಿಗ್ಗೆ 11.

ಜನಾರಣ್ಯ, ಒಡಲಾಳದ, ಮರದ
ಆಕೃತಿ ಪುಸ್ತಕ ರಾಜಾಜಿನಗರ : ಭಾನುವಾರ  ಕನ್ನಡ ಪುಸ್ತಕಗಳ ಅಂತರ್ಜಾಲ ಪುಸ್ತಕ ಮಳಿಗೆ (www.akrutibooks.com)ಉದ್ಘಾಟನೆ: ಚಂದ್ರಶೇಖರ ಕಂಬಾರ.
ಆಕೃತಿ ಪುಸ್ತಕ ಪ್ರಕಟಿಸಿರುವ `ಜನಾರಣ್ಯ~ಕಾದಂಬರಿ (ಬಂಗಾಲಿ ಮೂಲ ಲೇಖಕ: ಮಣಿಶಂಕರ್ ಮುಖರ್ಜಿ. ಕನ್ನಡಕ್ಕೆ: ಗೀತಾ ವಿಜಯ್ ಕುಮಾರ್). `ಒಡಲಾಳದ ತಳಮಳ~ ಕಥಾಸಂಕಲನ (ಲೇಖಕ: ಕೇಶವ ಕುಡ್ಲ) ಮತ್ತು `ಮರದ ಮರ್ಮರ~ ಮಕ್ಕಳ ನಾಟಕ(ನಾಟಕಕಾರ: ನಾರಾಯಣ ಕಂಗಿಲ) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ಡಿ.ಕೆ.ಚೌಟ, ಸಾ.ಶಿ.ಮರಳಯ್ಯ, ಪ್ರೇಮಾ ಭಟ್. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.30

ಮರೆತು ಹೋದ ರಾಗ
ಗುರುರಾಜ ಪ್ರಕಾಶನ: ಭಾನುವಾರ ಗೀತ ರಚನೆಕಾರರಾದ ಕೋ.ಲ. ರಂಗನಾಥ ರಾವ್ ಸಂಪಾದಿತ 31ನೇಯ ಕೃತಿ `ಮರೆತು ಹೋದ ರಾಗ~ ಕವನ ಸಂಕಲನ ಹಾಗೂ ಭಾಗ್ಯಲಕ್ಷ್ಮಿ ಅವರ ಸ್ವರಚಿತ ಕೃತಿ `ವಸಂತಾಗಮನ~ ಕವನ ಸಂಕಲನ ಲೋಕಾರ್ಪಣೆ. ಅತಿಥಿಗಳು: ರಾಮಮೂರ್ತಿ, ಹೆಬ್ಬಗೋಡಿ ರಾಮ್‌ಗೋಪಾಲ್.
ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಬೆಳಿಗ್ಗೆ 10. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT