ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿ: ತೇಗದ ಸಸಿ ನೆಡುವ ಕಾರ್ಯ ಶುರು

Last Updated 20 ಜುಲೈ 2013, 8:00 IST
ಅಕ್ಷರ ಗಾತ್ರ

ರಾಯಚೂರು: ವನಮಹೋತ್ಸವ ಅಂಗವಾಗಿ ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕವು ಬೀಜೋತ್ಪಾದನೆ ಕಾರ್ಯಕ್ಕೆ ಬಳಸುವ 25 ಎಕರೆ ಪ್ರದೇಶದ ಸುತ್ತಲೂ ಶುಕ್ರವಾರ ತೇಗದ (ಸಾಗವಾನಿ) 960 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೃಷಿ ವಿವಿ ಕುಲಪತಿ ಡಾ.ಬಿ.ವಿ ಪಾಟೀಲ್ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಕೃಷಿ ವಿವಿ ವಿವಿಧ ವಿಭಾಗ, ಘಟಕಗಳ ಆವರಣದಲ್ಲಿ ಹೆಚ್ಚು ಕೃಷಿ ಅರಣ್ಯ ಗಿಡಗಳನ್ನು ಬೆಳೆಸಲು ಆಯಾ ವಿಭಾಗದ ಮುಖ್ಯಸ್ಥರು ಆಸಕ್ತಿ ವಹಿಸಬೇಕು. ಇದರಿಂದ ಪರಿಸರ ಸಂರಕ್ಷಣೆ ಜತೆಗೆ ವಿಶ್ವವಿದ್ಯಾಲಯಕ್ಕೂ ಆದಾಯ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ ಚಕ್ರಪಾಣಿ, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್ ಜನಗೌಡರ್, ಬೀಜ ಘಟಕ ವಿಶೇಷಾಧಿಕಾರಿ ಡಾ.ಬಸವೇಗೌಡ, ಸಹ ಸಂಶೋಧನಾ ನಿರ್ದೇಶಕ ಡಾ.ಐ ಶಂಕರಗೌಡ, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಎನ್ ಹಂಚಿನಾಳ, ಹಿರಿಯ ಕೀಟ ತಜ್ಞ ಡಾ.ಎಂ ಭೀಮಣ್ಣ, ಕಾರ್ಯಕ್ರಮ ಸಂಯೋಜಕ ಡಾ ಪ್ರಮೋದ ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT