ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ರಾಜಕೀಯ ವ್ಯಕ್ತಿಗಳ ಶಿಫಾರಸು ಆಧರಿಸಿ ಅದಿರು ರಫ್ತಿಗೆ ಅನುಮತಿ ನೀಡಲಾಯಿತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಆಗಿನ ಸಚಿವ ಡಿ.ಕೆ.ಶಿವಕುಮಾರ್, ಆಗ ಜನತಾದಳ ನಾಯಕರಾಗಿದ್ದ ಸಿದ್ದರಾಮಯ್ಯ, ಆಗಿನ ಸಚಿವ ಎಚ್.ವಿಶ್ವನಾಥ್ ಅವರ ಶಿಫಾರಸು ಪತ್ರದ ಆಧಾರದಲ್ಲಿ ವಿಕ್ಟರಿ ಎಕ್ಸ್ಪೋರ್ಟ್ಸ್, ಇಂಡಿಯನ್ ರಾಕ್ ಮತ್ತಿತರ ಕಂಪೆನಿಗಳಿಗೆ ಅದಿರು ಮಂಜೂರು ಮಾಡಿರುವ ಬಗ್ಗೆ ದಾಖಲೆಗಳು ದೊರೆತಿವೆ ಎಂದರು. `ಅಂದು ಗಣಿ ಖಾತೆಯ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯ ಪತ್ರದ ಆಧಾರದಲ್ಲಿ ಮೈಸೂರು ಮಿನರಲ್ಸ್ನ ಅದಿರನ್ನು ಖಾಸಗಿ ಕಂಪೆನಿಗಳಿಗೆ ಮಾರಲು ಅನುಮತಿ ನೀಡಿದ್ದರು. ಉತ್ತಮ ದರ್ಜೆಯ ಕಬ್ಬಿಣದ ಅದಿರಿಗೆ ಪ್ರತಿ ಟನ್ಗೆ ರೂ 25ರಿಂದ ರೂ 226ರ ದರದಲ್ಲಿ ಮಾರಾಟ ಮಾಡಲಾಗಿತ್ತು. ಆದರೆ ಆಗ ಮಾರುಕಟ್ಟೆಯಲ್ಲಿ ಪ್ರತಿ ಟನ್ ಅದಿರಿಗೆ ರೂ 2,200 ದರ ಇತ್ತು. ಈ ಅಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ~ ಎಂದು ಹಿರೇಮಠ ಆರೋಪಿಸಿದರು.