`ಮುಂದಿನ ಮೂರು ವರ್ಷಗಳಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಗೇರಿ ಬಳಿಯ ಜಾಗದಲ್ಲಿ, ಇಡೀ ದೇಶದಲ್ಲಿಯೇ ವಿಶಿಷ್ಟ ಕ್ಯಾಂಪಸ್ಸನ್ನಾಗಿ ಪರಿವರ್ತಿಸಲು ಯೋಜಿಸಲಾಗಿದ್ದು, 1,200 ವಿದ್ಯಾರ್ಥಿಗಳು, 200 ಬೋಧಕ ಸಿಬ್ಬಂದಿ ಇರಲಿದ್ದಾರೆ. ಯಾವುದೇ ಕೋರ್ಸನ್ನು ಪಡೆದವರೂ ಸಹ ಇಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದಾಗಿದೆ. ಈ ಕೋರ್ಸನ್ನು ಪೂರೈಸಿದವರು ಸಾರ್ವಜನಿಕ ವಲಯಕ್ಕೆ ಸೇರಬೇಕೆಂದು ನಮ್ಮ ಆಸೆ. ಖಾಸಗಿ ಸಾಂಸ್ಥೆಗಳಲ್ಲೂ ಕೆಲಸ ಮಾಡಬಹುದಾಗಿದೆ~ ಎಂದು ಅವರು ವಿವರಿಸಿದರು.