ಶ್ರೀರಂಗಪಟ್ಟಣ: ಶುಕ್ರವಾರ (ಅ.5) ರಾತ್ರಿ 8ರಿಂದ ಶನಿವಾರ ಬೆಳಿಗ್ಗೆ 6 ಗಂಟೆವರೆಗೆ ಕೆಆರ್ಎಸ್ ಜಲಾಶಯದಿಂದ 23 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಸಂಜೆ 4 ಗಂಟೆ ವೇಳೆಗೆ ನದಿಗೆ ಬಿಡುವ ನೀರಿನ ಪ್ರಮಾಣ 10,670 ಕ್ಯೂಸೆಕ್ಗೆ ಇಳಿದಿದ್ದು, ಕಾಲುವೆಗೆ 4 ಸಾವಿರ ಕ್ಯೂಸೆಕ್ ಬಿಡಲಾಗುತ್ತಿದೆ. ಈಗ ಒಳಹರಿವು 12,981 ಕ್ಯೂಸೆಕ್ಅಣೆಕಟ್ಟೆ ನೀರಿನ ಮಟ್ಟ 106.42 ಅಡಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.