ರಾಜರಾಜೇಶ್ವರಿನಗರ: ಸ್ವರ್ಗಕ್ಕೆ ಮೂರೇ ಗೇಣು ಎಂದು ಸಂತಸಪಡುತ್ತಿದ್ದ ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಶ್ರೀನಿವಾಸಪುರದ ರೈತರ ಮೊಗದಲ್ಲಿ ಈಗ ಬೇಸರ ಮನೆ ಮಾಡಿದೆ. ಏಕೆಂದರೆ, ವೃಷ ಭಾವತಿ ನದಿಯಿಂದ ಗ್ರಾಮದ ನೀರಾವರಿ ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರುಣಿಸುತ್ತಿದ್ದ ಪಂಪ್ಸೆಟ್ ಕೆಟ್ಟು ಹೋಗಿ ಹಲವು ವರ್ಷಗಳೇ ಕಳೆದರೂ ಇದುವರೆಗೂ ಅದರ ದುರಸ್ತಿ ಕಾಣಲು ಸಾಧ್ಯವಾಗಿಲ್ಲ.
1999ರಲ್ಲಿ ವೃಷಭಾವತಿ ನದಿಯಿಂದ ಗ್ರಾಮದ ಸುಮಾರು 550 ಎಕರೆ ಪ್ರದೇಶಕ್ಕೆ ಏತ ನೀರಾವರಿ ಮೂಲಕ ನೀರು ಹರಿಸಿದ್ದರಿಂದ ಸಮೃದ್ಧಿಯಾಗಿ ಬತ್ತ, ತೆಂಗು, ರೇಷ್ಮೆ , ಅಡಿಕೆ, ತರಕಾರಿ, ಹೂವು- ಹಣ್ಣು ಬೆಳೆದ ರೈತರು ನೆಮ್ಮದಿಯಿಂದ ಜೀವನ ಸಾಗಿದರು. ಇದರಿಂದ ರೈತರ ಬದುಕು ಕೂಡ ಹಸನಾಗಿತ್ತು. ~