ಕರ್ನಾಟಕ ಲೋಕ ಸೇವಾ ಆಯೋಗದ ಕೊಳೆ ಪೂರ್ತಿ ತೊಳೆದುಬಿಡಿ ಎಂದು ಮುಖ್ಯಮಂತ್ರಿಗೆ ಸಲಹೆ ನೀಡಿ ಪ್ರಜಾವಾಣಿ ಖಡಕ್ ಸಂಪಾದಕೀಯ ಬರೆದು (ಸೆ ೨೩) ಶ್ಲಾಘನೀಯ ಕೆಲಸ ಮಾಡಿದೆ. ಈಚೆಗೆ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ಲೇಖನ ಓದಿದ ಮೇಲಂತೂ ಕೆಪಿಎಸ್ಸಿ ಅಂದರೆ ಇಸ್ಸೀ! ಎನ್ನುವಂತಾಗಿದೆ.
ಕೊಳೆತೊಳೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಅದೆಷ್ಟು ಪ್ರಾಮಾಣಿಕವಾಗಿ ಮಾಡುತ್ತದೆ ಎಂಬುದನ್ನು ಆಧರಿಸಿಯೇ ನಾವೆಲ್ಲ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸಬೇಕಿದೆ.