ಆದರೆ ಈ ಸಂದರ್ಭದಲ್ಲಿ, ಕೆಲವು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ದೂರಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋದರು.
ಕೆಎಟಿ ನೀಡಿದ ಆದೇಶವನ್ನು ನಂತರ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಅಂತಿಮ ಆದೇಶ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ, ‘ಮಾಡರೇಷನ್’ (ಆಯ್ದ ಕೆಲವು ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸುವುದು) ಪ್ರಕ್ರಿಯೆಯಲ್ಲಿ ಮಾರ್ಪಾಡು ತರಲು ಸೂಚಿಸಿತು.
ಆದರೆ, ಹೈಕೋರ್ಟ್ ಹೇಳಿದಂತೆ ಮಾಡರೇಷನ್ ನಡೆಸದ ಕಾರಣ, ತಮ್ಮ 201 ಅಂಕಗಳು ಕಡಿಮೆಯಾ-ಗಿವೆ ಎಂದು ಮುರಳೀಧರ ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ.