ವಿಚಾರಣೆ ವೇಳೆ ಹಿಂಗೊರಾಣಿ ಅವರು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 82 ಮತ್ತು 82ರ ಅಡಿಯಲ್ಲಿ ಓರ್ವ ಬಾಲಾಪರಾಧಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದಾಗ ಆತ ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವನೋ ಅಥವಾ ಅದಕ್ಕೂ ಒಳಗಿನವನೋ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಆತ ನನ್ನು ಬಾಲಾಪರಾಧ ನ್ಯಾಯ ಮಂಡಳಿ ಇಲ್ಲವೇ, ವಿಚಾರಣಾ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ಇದು 16ರಿಂದ 18 ವಯಸ್ಸಿನಲ್ಲಿರುವ ಆರೋಪಿಗಳಿಗೆ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದರು.
ಪ್ರಕರಣದ ತೀವ್ರತೆ, ಆರೋಪಿ ಮಾನಸಿಕ ಪ್ರಬುದ್ಧತೆ, ಆರೋಪಿಗೆ ತನ್ನ ಅಪರಾಧ ಕುರಿತಾದ ಕಾಯ್ದೆಯಿಂದಾಗುವ ಪರಿಣಾಮದ ತಿಳುವಳಿಕೆ ಈ ಎಲ್ಲ ಅಂಶಗಳಿಗೆ ಮ್ಯಾಜಿಸ್ಟ್ರೇಟ್ ಗಮನ ಹರಿಸಬೇಕು ಎಂದು ಹಿಂಗೊರಾಣಿ ಹೇಳಿದರು.