ನವದೆಹಲಿ (ಪಿಟಿಐ): ಜೈವಿಕವಾಗಿ ಸೂಕ್ಷ್ಮಪ್ರದೇಶವೆಂದು ಪರಿಗಣಿತವಾಗಿರುವ ಕೇದಾರನಾಥದಲ್ಲಿ ಇತ್ತೀಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಮನುಷ್ಯನ ಚಟುವಟಿಕೆಗಳೇ ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ.
ಪ್ರತಿಷ್ಠಿತ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಜಿಯೊಲಾಜಿ ಸಂಸ್ಥೆಯ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ಒತ್ತಿ ಹೇಳಲಾಗಿದೆ.
ಪ್ರಾಕೃತಿಕ ತಾಣವಾಗಿರುವ ಕೇದಾರನಾಥದಲ್ಲಿ ಪ್ರವಾಸೋದ್ಯಮ ಮತ್ತು ಮನುಷ್ಯನ ಅತಿಯಾದ ಚಟುವಟಿಕೆಗಳೇ ಪ್ರವಾಹದಂತಹ ನೈಸರ್ಗಿಕ ವಿಕೋಪ ಸಂಭವಿಸಲು ಕಾರಣ.
ಮನುಷ್ಯ ಇದೇ ರೀತಿ ಚಟುವಟಿಕೆಗಳನ್ನು ಮುಂದುವರಿಸಿದಲ್ಲಿ ಭವಿಷ್ಯದಲ್ಲೂ ಇಂಥ ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ಅಧ್ಯಯನ ಎಚ್ಚರಿಸಿದೆ.