ಅಸಹಾಯಕ ವರ್ತನೆ: ಬಿಜೆಪಿ
ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ಅಸಹಾಯಕತನವನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದ ಬಿಜೆಪಿ, 2 ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಆದರ್ಶ್ ಹೌಸಿಂಗ್ ಹಗರಣಗಳನ್ನು ಮರೆಮಾಚಲು ಪ್ರಧಾನಿ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಧಾನಿ ಸಮರ್ಥರಲ್ಲ ಎಂಬಂತೆ ಕಂಡು ಬರುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದರು. ಆದರೆ ಎಲ್ಲಾ ಹಗರಣಗಳಿಗೆ ಮಾಧ್ಯಮಗಳು ಮತ್ತು ವಿರೋಧಪಕ್ಷಗಳೇ ಕಾರಣ ಎಂದು ಪ್ರಧಾನಿ ಅವರು ಆರೋಪಿಸುತ್ತಿರುವುದು ವಿಷಾದಕರ ಎಂದು ಗಡ್ಕರಿ ಹೇಳಿದರು.