ಕಾರವಾರ: ಮಳೆಯಿಂದ ಮಹಾರಾಷ್ಟ್ರದ ರತ್ನಗಿರಿ ಬಳಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಕೂಡ ಕೊಂಕಣ ಮಾರ್ಗದಲ್ಲಿ ಕೆಲ ರೈಲುಗಳ ಸಂಚಾರ ರದ್ದಾಯಿತು.
ಮುಂಬೈ-ಮಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರದ್ದುಗೊಂಡ ಪ್ರಮುಖ ರೈಲು. ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಕಾರವಾರಕ್ಕೆ ಆಗಮಿಸಿದ ತಿರುವನಂತಪುರ- ಹಜರತ್ ನಿಜಾಮುದ್ದೀನ್ `ರಾಜಧಾನಿ~ ಎಕ್ಸ್ಪ್ರೆಸ್ ರೈಲಿನ ಮಾರ್ಗವನ್ನು ಬದಲಿಸಲಾಯಿತು. ಇದರಿಂದ ಈ ರೈಲು ಲೋಂಡಾ, ಮೀರಜ್ ಮಾರ್ಗವಾಗಿ ದೆಹಲಿಯತ್ತ ಸಾಗಿತು.
ಕಾರವಾರ ನಿಲ್ದಾಣಕ್ಕೆ ಶುಕ್ರವಾರ ಮಧ್ಯರಾತ್ರಿ 12ಕ್ಕೆ ಆಗಮಿಸಬೇಕಿದ್ದ ಎರ್ನಾಕುಲಂ- ಹಜರತ್ ನಿಜಾಮುದ್ದೀನ್ `ಮಂಗಳಾ ಎಕ್ಸ್ಪ್ರೆಸ್~ ರೈಲು ಶನಿವಾರ ಬೆಳಗಿನ ಜಾವ 6ಕ್ಕೆ ಆಗಮಿಸಿದಾಗ ಇಲ್ಲಿನ ನಿಲ್ದಾಣದಲ್ಲಿ ಅದನ್ನು ನಿಲ್ಲಿಸಲಾಯಿತು.