ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Last Updated 21 ಏಪ್ರಿಲ್ 2013, 10:28 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಏ. 20ರ ಒಳಗಾಗಿ ಒಟ್ಟು 21 ಅಭ್ಯರ್ಥಿಗಳು  ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಒಟ್ಟು 58 ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿ ಉಳಿದಂತಾಗಿದೆ.

ಕುಷ್ಟಗಿ: ನಾಮಪತ್ರ ಸಲ್ಲಿಸಿದ್ದ ಒಟ್ಟು 16 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಆನಂದಗೌಡ ನಾಯಕ್ ಹಾಗೂ ಹನಮಂತಪ್ಪ ಮಲ್ಲಾಡದ  ನಾಮಪತ್ರ ಹಿಂಪಡೆದರು. 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಅಮರೇಗೌಡ ಬಯ್ಯಾಪುರ- ಕಾಂಗ್ರೆಸ್, ದೊಡ್ಡನಗೌಡ ಪಾಟೀಲ್- ಬಿಜೆಪಿ, ಕೆ. ಶರಣಪ್ಪ- ಜೆ.ಡಿ.ಎಸ್., ಶಿವಪುತ್ರಪ್ಪ ಗುಮಗೇರಿ- ಬಿಎಸ್‌ಪಿ, ಗೋನಾಳ ರಾಜಶೇಖರಗೌಡ- ಬಿಎಸ್‌ಆರ್ ಕಾಂಗ್ರೆಸ್, ಫಕೀರಪ್ಪ ಸೋಮಪ್ಪ ಚಳಗೇರಿ- ಕೆಜೆಪಿ, ಬಸವರಾಜ ಬುನ್ನಟ್ಟಿ- ಸಿಪಿಐಎಂಎಲ್, ಮಲ್ಲಿಕಾಜುನ ಸ್ವಾಮಿ ಹಿರೇಮಠ- ಜೆ.ಡಿ.ಯು, ಅಬ್ದುಲ್ ನಯೀಮ್- ಪಕ್ಷೇತರ, ಪುರದಪ್ಪ ಕಂದಗಲ್- ಪಕ್ಷೇತರ, ಬಸವರಾಜ ನರಸಪ್ಪ ಬಿಲಕಾರ- ಪಕ್ಷೇತರ, ಮರಿಯಪ್ಪ ಮಡಿವಾಳರ- ಪಕ್ಷೇತರ, ಲಕ್ಷ್ಮಣ ತಳವಾರ- ಪಕ್ಷೇತರ ಮತ್ತು ಹಿರೇಮಠ ಸಂಗಮೇಶ ಶೇಖರಯ್ಯ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ.

ಯಲಬುರ್ಗಾ: ನಾಮಪತ್ರ ಸಲ್ಲಿಸಿದ್ದ ಒಟ್ಟು 16 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಗಂಗಮ್ಮ ಗುಳಗಣ್ಣವರ್, ನೀಲಾಂಬಿಕಾ ಪಾಟೀಲ, ಡಿ.ಕೆ. ಪರಶುರಾಮ ಛಲವಾದಿ ಮತ್ತು ದ್ಯಾಮಣ್ಣ ಶಂಕರಪ್ಪ ಜಮಖಂಡಿ ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟು 12 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಆಚಾರ ಹಾಲಪ್ಪ ಬಸಪ್ಪ- ಬಿಜೆಪಿ, ದುರಗಪ್ಪ ಹಾಳಕೇರಿ- ಬಿಎಸ್‌ಪಿ,. ಜಿ.ಟಿ. ಪಂಪಾಪತಿ-  ಜೆಡಿಎಸ್, ಬಸವರಾಜ ರಾಯರಡ್ಡಿ- ಕಾಂಗ್ರೆಸ್, ನವೀನ್‌ಕುಮಾರ್ ಗುಳಗಣ್ಣವರ್- ಬಿ.ಎಸ್. ಆರ್ ಕಾಂಗ್ರೆಸ್., ಸಿ.ಎಚ್. ಪಾಟೀಲ- ಕೆಜೆಪಿ, ಗಾಣಿಗೇರ ಮಲಕಾಜಪ್ಪ ಶಿವರುದ್ರಪ್ಪ- ಪಕ್ಷೇತರ, ಶಿವಶಂಕ್ರಯ್ಯ ಬಳಿಗೇರಿಮಠ- ಪಕ್ಷೇತರ, ಶಿವಶಂಕರ ಲಿಂಗರಾಜ ದೇಸಾಯಿ- ಪಕ್ಷೇತರ, ಸಿದ್ದಪ್ಪ ಹಕ್ಕಿಗುಣಿ- ಪಕ್ಷೇತರ, ಸೋಮಶೇಖರ ಟಿ.ಎಂ.- ಪಕ್ಷೇತರ ಮತ್ತು ನಾಗರಾಜ ಕೊಳಜಿ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಗಂಗಾವತಿ: ಒಟ್ಟು 16 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ರಜಾಕ್ ಸಾಬ್, ಯಮನೂರಪ್ಪ ಪುಂಡಗೌಡ ಕುರುಬರು, ಎಂ. ಖಾದರಸಾಬ್, ನಾರಾಯಣಪ್ಪ ಐಲಿ, ನಂದಾಪುರ ನಾಗರಾಜ, ಫರೀದುದ್ದೀನ್, ಮಂಜುಳಾ ಪಟೇಲ್ ಉಮೇದುವಾರಿಕೆ ಹಿಂಪಡೆದರ. ಇದರಿಂದ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಇಕ್ಬಾಲ್ ಅನ್ಸಾರಿ- ಜೆಡಿಎಸ್, ಪರಣ್ಣ ಮುನವಳ್ಳಿ- ಬಿಜೆಪಿ, ಎಚ್. ಆರ್. ಶ್ರಿನಾಥ- ಕಾಂಗ್ರೆಸ್, ಹುಲುಗಪ್ಪ ದೇವರಮನಿ- ಬಿಎಸ್‌ಪಿ, ಪಂಪನಗೌಡ್ರು ಪೊಲೀಸ್ ಪಾಟೀಲ್- ಬಿ.ಎಸ್.ಆರ್. ಕಾಂಗ್ರೆಸ್, ಬಸವರಾಜ ಪಾಟೀಲ ಅನ್ವರಿ- ಕೆಜೆಪಿ, ಭಾರಧ್ವಾಜ ಸುಬ್ಬರಾವ್- ಸಿಪಿಐಎಂ.ಎಲ್, ಜೆ. ವಿಜಯಕುಮಾರ- ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ ಮತ್ತು ಶರಣಬಸಪ್ಪ ಎಸ್. ಪಾನಶಾಪ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕೊಪ್ಪಳ: 13 ಅಭ್ಯರ್ಥಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಉಮೇಶ್ ವಿ ಬಣಗಾರ, ನೆಕ್ಕಂಟಿ ರವಿಕುಮಾರ, ಕೆ. ಬಸವರಾಜ ಹಿಟ್ನಾಳ್, ಮೋಹನಗೌಡ ವೈ. ಪಾಟೀಲ ಮತ್ತು ಶಂಕ್ರಯ್ಯ ಗಂಧದಮಠ ಉಮೇದುವಾರಿಕೆ ಹಿಂಪಡೆದಿದ್ದಾರೆ. ಒಟ್ಟು 8 ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ. ಕರಡಿ ಸಂಗಣ್ಣ- ಬಿಜೆಪಿ, ಪ್ರದೀಪ ವಿರುಪಾಕ್ಷಗೌಡ- ಜೆಡಿಎಸ್., ಕೆ.ರಾಘವೇಂದ್ರ ಹಿಟ್ನಾಳ್- ಕಾಂಗ್ರೆಸ್, ಶಿವಕುಮಾರ ವಡೇರಹಳ್ಳಿ- ಎನ್.ಸಿ.ಪಿ., ನಿರ್ಮಲ ಮಲ್ಲಿಕಾರ್ಜುನ ಹಡಪದ- ಬಿಎಸ್‌ಪಿ, ನೆಕ್ಕಂಟಿ ನಾಗರಾಜ- ಬಿಎಸ್‌ಆರ್ ಕಾಂಗ್ರೆಸ್, ಮಂಜುನಾಥ ಚಕ್ರಸಾಲಿ- ಸಿಪಿಐಎಂಎಲ್ ಮತ್ತು ಕೆ.ಎಂ. ಸೈಯದ್- ಕೆಜೆಪಿ ಪಕ್ಷದಿಂದ ಅಂತಿಮ ಕಣದಲ್ಲಿದ್ದಾರೆ.

ಕನಕಗಿರಿ: ನಾಮಪತ್ರ ಸ್ವೀಕೃತಗೊಂಡಿದ್ದ ಒಟ್ಟು 18 ಅಭ್ಯರ್ಥಿಗಳ ಪೈಕಿ ಸರ್ವ ಜನತಾ ಪಾರ್ಟಿಯ ಕೆ.ಎಚ್. ಹುಲಗಣ್ಣ, ಪಕ್ಷೇತರ ಅಭ್ಯರ್ಥಿಗಳಾದ ಲಂಕೇಶ್ ಗುಳದಾಳ ಮತ್ತು ಶಾಮೀಲಪ್ಪ ಗೊರೇಬಾಳ ಸೇರಿದಂತೆ 3 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 15 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಅಕ್ಕಿರೊಟ್ಟಿ ಹುಲಗಪ್ಪ- ಸಿಪಿಐಎಂ, ಪ್ರಕಾಶ್ ಎಲ್ ರಾಠೋಡ- ಜೆ.ಡಿ.ಎಸ್., ರಾಮಾನಾಯ್ಕ ಲಮಾಣಿ- ಬಿಜೆಪಿ, ಶಿವರಾಜ ತಂಗಡಗಿ- ಕಾಂಗ್ರೆಸ್, ಶ್ರಿಧರ- ಬಿಎಸ್‌ಪಿ, ಎಂ. ಏಸಪ್ಪ- ಸಿಪಿಐ (ಎಂಎಲ್) ಲಿಬರೇಷನ್, ದ್ಯಾಮಮ್ಮ ಮಂಕಾಳೆಪ್ಪ ಚೌಡ್ಕಿ- ಸಿಪಿಐಎಂಎಲ್ ರೆಡ್‌ಸ್ಟಾರ್, ಬಸವರಾಜ ಧಡೇಸೂಗೂರು- ಕೆ.ಜೆ.ಪಿ., ಭವಾನಿಮಠ ಮುಕುಂದರಾವ್- ಬಿಎಸ್‌ಆರ್ ಕಾಂಗ್ರೆಸ್., ತಿಪ್ಪಣ್ಣ ವಿ.- ಪಕ್ಷೇತರ, ನಾಗರಾಜ- ಪಕ್ಷೇತರ, ಪಾಲಾಕ್ಷಯ್ಯ ಹಿರೇಮಠ- ಪಕ್ಷೇತರ, ಮೋತಿಲಾಲ್ ನಾಯ್ಕ ರಾಠೋಡ್- ಪಕ್ಷೇತರ, ರಮೇಶ ಕೋಟಿ- ಪಕ್ಷೇತರ ಮತ್ತು ವಿಠೋಬ ದಾಸರ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT