ಕೋಲ್ಕತ್ತ (ಪಿಟಿಐ): ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಭಾರತ ತಂಡ ಸೋಲು ಅನುಭವಿಸಿದ ಕಾರಣ ಕೋಚ್ ವಿಮ್ ಕೊವರ್ಮನ್ಸ್ ವಿರುದ್ಧ ಟೀಕಾ ಪ್ರಹಾರವೇ ಶುರುವಾಗಿದೆ. ‘ಆಫ್ಘಾನಿಸ್ತಾನ ಎದುರು ಭಾರತ ಸೋಲು ಕಂಡಿದ್ದು ಅಸಹನೀಯ. ಆದ್ದರಿ ಂದ ಇದನ್ನು ತನಿಖೆಗೆ ಒಳಪಡಿಸಬೇಕು. ಸಾಕಷ್ಟು ವೇತನದ ಜೊತೆಗೆ ಕೋಚ್ಗೆ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಅವರನ್ನು ಕೋಚ್ ಸ್ಥಾನದಿಂದ ತಗೆದು ಹಾಕಬೇಕು’ ಎಂದು ಒಲಿಂಪಿಯನ್ ಪಿ.ಕೆ. ಬ್ಯಾನರ್ಜಿ ಆಗ್ರಹಿಸಿದ್ದಾರೆ.
‘ಆಟಗಾರರು ಪಂದ್ಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನೇಪಾಳ ಎದುರಿನ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಭಾರತ ಒಂದು ಗೋಲಿನಿಂದ ಹಿನ್ನಡೆಯಲ್ಲಿದ್ದಾಗ ಪಂದ್ಯವನ್ನು ನೋಡುವುದನ್ನು ನಿಲ್ಲಿಸಿಬಿಟ್ಟೆ’ ಎಂದೂ ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.
‘ನಾಯಕ ಸುನಿಲ್ ಚೆಟ್ರಿ ಅವರನ್ನು ಮೊದಲ ಇಲೆವೆನ್ನಲ್ಲಿ ಏಕೆ ಕಣಕ್ಕಿಳಿಸಲಿಲ್ಲ. ಇದು ಸಹ ಭಾರತದ ಸೋಲಿಗೆ ಕಾರಣವಾಯಿತು. ಕೋಚ್ ತಗೆದುಕೊಂಡು ಕೆಟ್ಟ ನಿರ್ಧಾರ ಇದು. ಇದರ ಹೊಣೆ ಕೊವರ್ಮನ್ಸ್ ಹೊತ್ತುಕೊಳ್ಳಬೇಕು’ ಎಂದು ಮಾಜಿ ಆಟಗಾರ ಚೂನಿ ಗೋಸ್ವಾಮಿ ಹೇಳಿದ್ದಾರೆ.
ಕಾಬೂಲ್ ವರದಿ: ಭಾರತದಲ್ಲಿ ಕೋಚ್ ವಿರುದ್ಧ ಟೀಕೆಯ ಮಳೆಯೇ ಸುರಿಯುತ್ತಿದ್ದರೆ ಚಾಂಪಿಯನ್ ಅಫ್ಘಾನಿಸ್ತಾನಕ್ಕೆ ಪ್ರಶಂಸೆಯೇ ಮಹಾಪೂರವೇ ಹರಿದು ಬರುತ್ತಿದೆ.