ನೀರಿನ ಸೌಕರ್ಯ, ಮೂಟ್ ಕೋರ್ಟ್ (ಅಣಕು ನ್ಯಾಯಾಲಯ) ಮತ್ತು ತರಗತಿ ಕೊಠಡಿಗಳು ಇಲ್ಲದಿರುವುದರಿಂದ ಅಲ್ಲಿಗೆ ಸ್ಥಳಾಂತರಿಸಿದರೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಇತ್ತೀಚೆಗೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಸ್.ಬಾಗಲೆ ನೇತೃತ್ವದ ತಂಡ ಹೊಸ ಕಟ್ಟಡವನ್ನು ಪರಿಶೀಲಿಸಿದ ಬಳಿಕ, ಅಲ್ಲಿಗೆ ಸದ್ಯಕ್ಕೆ ಸ್ಥಳಾಂತರಗೊಳ್ಳಬಾರದು ಎಂದು ಸೂಚಿಸಿದೆ.
ದಿನಾಂಕಕ್ಕೆ ಕಾಯುತ್ತಿದ್ದೆವು: ‘ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಆಹ್ವಾನಿಸಬೇಕು. ಅವರು ನೀಡುವ ದಿನಾಂಕಕ್ಕೆ ಕಾಯುತ್ತಿದ್ದೆವು.