ಅಮರಾವತಿ (ಪಿಟಿಐ): ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು, ಫೆ 12ರಂದು ಪೊಲೀಸರು 1ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿರುವುದಕ್ಕೆ ತಮ್ಮ ಹಾಗೂ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ನಡುವಿನ `ಸಂವಹನ ಅಂತರ~ ಕಾರಣ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ಕಾಂಗ್ರೆಸ್ ಶಾಸಕ ರಾವ್ಸಾಹೇಬ್ ಶೆಖಾವತ್ ಮಂಗಳವಾರ ಹೇಳಿದ್ದಾರೆ.