ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಅತಿಕ್ರಮಣ ತೆರವಿಗೆ ಅ. 15ರ ಗಡುವು

Last Updated 27 ಸೆಪ್ಟೆಂಬರ್ 2011, 8:15 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: `ಕಿತ್ತೂರು ರಾಣಿ ಚನ್ನಮ್ಮನ ಕೋಟೆ ಸುತ್ತಲೂ ನಡೆದಿರುವ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡ ತೆರವು, ರಾಜವಂಶಸ್ಥರಿಗೆ ಗೌರವಪೂರ್ವಕ ಪರಿಹಾರ ಮತ್ತು ಸಂಗೊಳ್ಳಿ-ಅಮಟೂರು ಉತ್ಸವ ಆಚರಣೆ ಮಾಡುವ ಲಿಖಿತ ಭರವಸೆಯನ್ನು ಸರಕಾರ ನೀಡದಿದ್ದರೆ ಅಕ್ಟೋಬರ್ 15ರಂದು ಧರಣಿ ಕೈಗೊಳ್ಳಲಾಗುವುದು~ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ತಿಳಿಸಿದರು.

ಭಾನುವಾರ ಸಂಜೆ ಸಂಗೊಳ್ಳಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, `ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಲ್ಲಿಯವರೆಗೆ ಕಿತ್ತೂರಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಲೆಕ್ಕ ಹೇಳಿ~ ಎಂದು ಕೇಳಿದರು.

`ರಾಷ್ಟ್ರೀಯ ಹೋರಾಟಗಾರ್ತಿ ಚನ್ನಮ್ಮನ ಊರು ಕಿತ್ತೂರು. ಅದು ಯಾರ ಆಸ್ತಿಯೂ ಅಲ್ಲ. ನನ್ನ ಅಲ್ಲಿಯ ಪ್ರವೇಶವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ~ ಎಂದರು.

`ಇದು ಶಾಸಕರ ವಿರುದ್ಧದ ಹೋರಾಟವಲ್ಲ~ ಎಂದು ಪುನರುಚ್ಚರಿಸಿದ ಅವರು, `ಮುಂದಿನ ಜನಾಂಗಕ್ಕೆ ರಾಣಿಯ ಪ್ರೇರಣೆ ಉಳಿಯುವ ಉದ್ದೇಶದಿಂದ ಈ ಹೋರಾಟ ಕೈಗೆತ್ತಿಕೊಳ್ಳಲಾಗಿದೆ~ ಎಂದು ಹೇಳಿದರು.
`ಪಾರ್ಕು, ರಸ್ತೆ, ಬೀದಿಗೆ ಜೀವಂತ ಇರುವ ರಾಜಕಾರಣಿಗಳ ಹೆಸರು ಇಡುತ್ತಾರೆ. ಇಂತಹ ವೀರರ ನೆನಪಾಗುವುದಿಲ್ಲವೇ~ ಎಂದ ಮುತಾಲಿಕ ಅವರು, `ವೀರರ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು~ ಎಂದು ಒತ್ತಾಯಿಸಿದರು.

ಶಾಸಕರಿಂದಲೂ ಅತಿಕ್ರಮಣ: `ಬೈಲಹೊಂಗಲ ಪಟ್ಟಣದಲ್ಲಿ ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಮಾಡಲು ಈ ಮೊದಲು ಉದ್ದೇಶಿಸಿದ್ದ ಪುರಸಭೆಯ ಜಾಗೆಯನ್ನು ಬೈಲಹೊಂಗಲ ಶಾಸಕರು ಅತಿಕ್ರಮಣ ಮಾಡಿದ್ದಾರೆ~ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಮಾಡಲಗಿ ಆರೋಪಿಸಿದರು.

`ಕಿತ್ತೂರು ಪಟ್ಟಣದಲ್ಲಿ ಪ್ರಾಧಿಕಾರದ ವತಿಯಿಂದ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಹೇಳುತ್ತಾರೆ. ಎಲ್ಲಿ ಮಾಡಿದ್ದಾರೆ ಎಂಬುದನ್ನು ಇವರು ತೋರಿಸಿಕೊಡಬೇಕು~ ಎಂದು ಮಾಡಲಗಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT