ಸುವರ್ಣ ವಾಹಿನಿ ಯಲ್ಲಿ ಪ್ರಸಾರವಾಗುವ ಕನ್ನಡದ `ಕೋಟ್ಯಾಧಿಪತಿ~ 50ನೇ ಸಂಚಿಕೆ ಪ್ರಯುಕ್ತ ಮಂಗಳವಾರ (ಜೂ.5) ಸಂಚಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಂಚಿಕೆಯಿಂದ ಬರುವ ಹಣವನ್ನು ಸ್ವಯಂಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಜೀವನ ಪಯಣದ ಅಪರೂಪದ ಕ್ಷಣಗಳನ್ನು ಬಿಚ್ಚಿಡಲಿದ್ದಾರೆ.
ರಾತ್ರಿ 8ರಿಂದ 9.30ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುತ್ತಾರೆ.