ಲಖನೌ (ಪಿಟಿಐ): ಎರಡು ಕೋಮುಗಳ ನಡುವೆ ಶನಿವಾರ ನಡೆದ ಗುಂಪು ಘರ್ಷಣೆಯಲ್ಲಿ ಖಾಸಗಿ ಟಿ.ವಿ ಚಾನೆಲ್ನ ವರದಿಗಾರ ಮತ್ತು ಛಾಯಾಗ್ರಾಹಕರೊಬ್ಬರು ಸೇರಿದಂತೆ 9 ಮಂದಿ ಮೃತಪಟ್ಟು, 34 ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ನಡೆದಿದೆ.
ಐಬಿಎನ್7 ಚಾನೆಲ್ನ ವರದಿಗಾರ ರಾಜೇಶ್ ವರ್ಮಾ, ಛಾಯಾಗ್ರಾಹಕ ಇಸ್ರಾರ್ ಮೃತಪಟ್ಟಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸೇನೆ ಕರೆಸಲಾಗಿದೆ.