ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ಬೀದಿಗಳಲ್ಲಿ ಸಂಭ್ರಮ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್): ದೇಶದ ಪ್ರಥಮ ಪ್ರಜೆ ಹಾಗೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಮೊದಲ ಬಂಗಾಲಿ ಕೀರ್ತಿಗೆ ಪಾತ್ರರಾದ ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಲೇ ಕೋಲ್ಕತ್ತದ  ಹಾದಿಬೀದಿಗಳಲ್ಲಿ ಸಂಭ್ರಮವೊ ಸಂಭ್ರಮ. ಪಂಚತಾರಾ ಹೋಟೆಲ್‌ನಿಂದ ಹಿಡಿದು ಬೀದಿಗಳಲ್ಲೆಲ್ಲ ಭಾನುವಾರ `ಟೀ ಪಾರ್ಟಿ~ಯ ವಿಜಯೋತ್ಸವ ಕಂಡುಬಂತು.

ಪಟಾಕಿ, ಬಣ್ಣದ ಗುಲಾಲು ಸಂಭ್ರಮದಲ್ಲಿದ್ದ ನೂರಾರು ಜನ ಮೆರವಣಿಯುದ್ದಕ್ಕೂ ನೃತ್ಯದಲ್ಲಿ ತೊಡಗಿದ್ದರು. ರಾಜ್ಯ ಕಾಂಗ್ರೆಸ್ ಕೇಂದ್ರ ಕಚೇರಿ ಇರುವ ವಿಧಾನ ಭವನದಲ್ಲಿ ಬಂಗಾಳದ ಜನಪ್ರಿಯ ಸಿಹಿ `ಸಂದೇಶ~ ಅನ್ನು ಹಂಚಿ ಸಂಭ್ರಮಿಸಲಾಯಿತು. `ಈ ದಿನ ನಮಗೆಲ್ಲ ಐತಿಹಾಸಿಕ~ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ ಭಟ್ಟಾಚಾರ್ಯ ಹೇಳಿದರು.

ಕೆಲ ಕಾಂಗ್ರೆಸ್ ಮುಖಂಡರು ಪಂಚತಾರಾ ಹೋಟೆಲ್‌ಗಳಲ್ಲಿ ಚಹಾಕೂಟ ಏರ್ಪಡಿಸಿದ್ದರು. ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ನಾಯಕರಿಗೂ ತಿಳಿಸಲಾಗಿತ್ತಾದರೂ ಅವರ ಉಪಸ್ಥಿತಿ ಕಂಡುಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT