ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಕ್ರೀಡೋನ್ಮಾದ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಪ್ರೇಕ್ಷಕರು ಇಂಗ್ಲೆಂಡ್ ನಾಯಕ ಆಂಡ್ರೂ ಸ್ಟ್ರಾಸ್ ಮತ್ತು ಸಚಿನ್ ತೆಂಡೂಲ್ಕರ್ ಅವರ ರನ್ ಮಳೆಯನ್ನು ನೋಡಿ ಮಾತ್ರ ಆನಂದಿಸಲಿಲ್ಲ. ಇಡೀ ಪಂದ್ಯವನ್ನು ಉತ್ಸವದಂತೆ ಆಚರಿಸಿದರು. ಭಾರತದ ಧ್ವಜವನ್ನು ಅಂಗಿಯಾಗಿಸಿಕೊಂಡರು, ಭಾರತದ ನಕಾಶೆಯ ಮಾದರಿಯಲ್ಲಿ ಕೇಶಾಲಂಕಾರ ಮಾಡಿಸಿಕೊಂಡರು, ಮುಖಕ್ಕೆ ತ್ರಿವರ್ಣದ ಚಿತ್ತಾರ ಬಿಡಿಸಿಕೊಂಡರು....