ಮಡಿಕೇರಿಯ ಮಂಗಳಾದೇವಿ ನಗರದ ಎ.ಜೆ. ದಿವಾಕರ್ ಎಂಬುವರೇ ಥಳಿತಕ್ಕೆ ಒಳಗಾದ ವ್ಯಕ್ತಿ. ಇವರ ಜೊತೆ ಮತಾಂತರಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇರೆಗೆ ಪತ್ನಿ ಪೆಲ್ಸಿ, ಇತರರಾದ ಸುನೀತಾ, ಎಗ್ನಿಸ್ ಅವರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದರು. ಆದರೆ, ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಮಹಿಳೆಯರು ಪೆಟ್ಟು ತಿನ್ನದೆ ಬಚಾವಾದರು.