ಮಂಗಳವಾರ, 17–9–1963
ಖಾದಿ ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಲಿ
ಬೆಂಗಳೂರು, ಸೆ. 16 – ರಾಜ್ಯದ ಖಾದಿ ಬೋರ್ಡಿನ ಪರಿಸ್ಥಿತಿ ಉತ್ತಮಗೊಳ್ಳಬೇಕಾದರೆ ‘ಉಗ್ರವಾದ ಪರಿಹಾರ’ ಅಗತ್ಯವೆಂದು ಅಭಪ್ರಾಯಪಟ್ಟ ಬೋರ್ಡಿನ ಅಧ್ಯಕ್ಷ ಶ್ರೀ ಎಚ್. ಸಿದ್ಧವೀರಪ್ಪನವರು ಬೋರ್ಡಿಗೆ ಸಚಿವರೊಬ್ಬರು ಅಧ್ಯಕ್ಷರಾಗಿದ್ದು, ಐ.ಪಿ.ಎಸ್. ಮಟ್ಟದ ಅಧಿಕಾರಿಯೊಬ್ಬರನ್ನು ಆಡಳಿತಗಾರರನ್ನಾಗಿ ನೇಮಿಸಬೇಕೆಂದು ಸಲಹೆ ಮಾಡಿದರು.