ಪ್ರಜಾ ಪ್ರಗತಿರಂಗದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, `ಎಲ್ಲ ಸರ್ಕಾರಗಳು ದಲಿತ ಮತ್ತು ರೈತರ ಹಿತ ಬಲಿ ಕೊಟ್ಟಿದ್ದು, ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ. ಕೃಷಿ ಭೂಮಿಯನ್ನು ಮನಬಂದಂತೆ ಸ್ವಾಧೀನಕ್ಕೆ ಪಡೆಯಲಾಗುತ್ತಿದೆ ರೈತರು ಹಾಗೂ ದಲಿತರ ಹಿತ ಕಾಯುವಂತಹ ಹೊಸ ರಾಜಕೀಯ ಶಕ್ತಿ ಉದಯಿಸಬೇಕಿದೆ' ಎಂದರು. ರಾಜ್ಯ ಘಟಕದ ಉಪಾಧ್ಯಕ್ಷ ಪಿತಾಂಬ್ರಪ್ಪ ಬಿಳಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ಲೋಲಾಕ್ಷ, ಮಾರಸಂದ್ರ ಮುನಿಯಪ್ಪ, ಅಬ್ದುಲ್ ಮಜೀದ್, ಆರ್.ಮೋಹನ್ರಾಜ್, ಎಜಾಜ್ ಅಹಮದ್ ಫಾರೂಖಿ ಹಾಜರಿದ್ದರು.