ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ, ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಬಳ್ಳಿಯ ಅಡಿಯಲ್ಲಿರುವ, ಆಲೂಗಡ್ಡೆ ಗಾತ್ರದ ಗಡ್ಡೆಯನ್ನೇ ಬಿತ್ತನೆಗೆ ಬಳಸಲಾಗುತ್ತದೆ.
ರೈತರು ಬಿತ್ತನೆ ವೇಳೆ ಕಾರ್ಚಿಕಾಯಿ ಬಳ್ಳಿಯನ್ನು ಬುಡಸಮೇತ ಕಿತ್ತು ಬದುವಿನಲ್ಲಿ ಎಸೆದರೂ ಮತ್ತೆ ಅಲ್ಲೇ ಚಿಗಿತು ಅಲ್ಲಲ್ಲಿ ಬೇರು ಬಿಡುತ್ತದೆ. ಆ ಬೇರುಗಳಿಗೆ ಅಂಟಿಕೊಂಡಂತೆಯೇ ಇರುವ ಗಡ್ಡೆಯೇ ಮಳೆ ಸುರಿದ ನಂತರ ಹೊಸದಾಗಿ ಮೊಳಕೆ ಒಡೆಯುತ್ತದೆ.
ತಮ್ಮ ಜಮೀನಿನಲ್ಲಿ ಕಾರ್ಚಿಕಾಯಿ ಬೆಳೆಯಲು ಬಯಸುವ ರೈತರು, ಬೇರೆ ಜಮೀನುಗಳಲ್ಲಿ ದೊರೆಯುವ ಈ ಗಡ್ಡೆಯನ್ನು ತಂದು ಎಸೆದರೂ ಸಾಕು ಅಲ್ಲೇ ಹುಟ್ಟಿಕೊಂಡು, ಎರಡರಿಂದ ಎರಡೂವರೆ ತಿಂಗಳಲ್ಲೇ ಕಾಯಿ ನೀಡುತ್ತದೆ.