ಮುಂಬೈ (ಪಿಟಿಐ): ಪ್ರಮುಖ ಆಟಗಾರರು ಗಾಯದಿಂದ ಬಳಲುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಆಟಗಾರರಿಗೆ ಸಂಬಂಧಿಸಿದ `ಇಂಜುರಿ ಡಾಟಾಬೇಸ್~ ಸಿದ್ಧಪಡಿಸುವಂತೆ ಕೋರಿ ದೇಶದ ಪ್ರಮುಖ ಐಟಿ ಕಂಪೆನಿ ಇನ್ಫೋಸಿಸ್ನ್ನು ಸಂಪರ್ಕಿಸಿದೆ.
`ಆದರೆ ಇನ್ಫೋಸಿಸ್ ಜೊತೆಗಿನ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ~ ಎಂದು ಬಿಸಿಸಿಐ ಹೇಳಿದೆ.
`ಎನ್ಸಿಎ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ ಅವರು `ಇಂಜುರಿ ಮ್ಯಾನೇಜ್ಮೆಂಟ್~ಗೆ ಸಂಬಂಧಿಸಿದ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಕುರಿತು ಇನ್ಫೋಸಿಸ್ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಈಗ ನಡೆದಿರುವುದು ಪ್ರಾಥಮಿಕ ಹಂತದ ಮಾತುಕತೆ ಮಾತ್ರ~ ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಸೋಮವಾರ ಇಲ್ಲಿ ಹೇಳಿದರು.