ಉದ್ಯಾನ ನಗರಿಯ ಕರ್ನಾಟಕ ಗಾಲ್ಫ್ ಸಂಸ್ಥೆಯ ಕೋರ್ಸ್ನಲ್ಲಿ ಸೆ. 1ರಿಂದ 4ರ ವರೆಗೆ ನಡೆಯುವ `ಟೊಯೋಟಾ ಗಾಲ್ಫ್ ಉತ್ಸವ~ದ ಮೂರನೇ ಆವೃತ್ತಿಯಲ್ಲಿ ದೇಶದ ವಿವಿಧ ಭಾಗಗಳ 400 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಟ್, ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ), ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಕಂಪೆನಿಗಳ ಸಹಭಾಗಿತ್ವದದಲ್ಲಿ ಈ ಉತ್ಸವ ನಡೆಯಲಿದೆ. ಈ ವಿಷಯವನ್ನು ಟೋಯೊಟಾ ಮೋಟರ್ಸ್ನ ವಾಣಿಜ್ಯ ವಿಭಾಗದ ನಿರ್ವಹಣಾ ಉಪ ನಿರ್ದೇಶಕ ಶೇಖರ್ ವಿಶ್ವನಾಥನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಜಿಎ ಅಧ್ಯಕ್ಷ ಕೆ. ಚಂದ್ರ ಪ್ರಕಾಶ್, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ, ಋಷಿ ನಾರಾಯಣ ಗಾಲ್ಫ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ರಿಷಿ ನಾರಾಯಣ, ಮಂತ್ರಿ ಡೆವಲಪರ್ಸ್ನ ಸ್ನೇಹಾಲ್ ಮಂತ್ರಿ ಹಾಗೂ ಪಾರ್ಕ್ ಪ್ಲಾಜಾದ ಅಸ್ಟೀನ್ ಕೋಚ್ ಉಪಸ್ಥಿತರಿದ್ದರು.