ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಮುನ್ನಡೆಯಲ್ಲಿ ತ್ರಿಶೂಲ್ ಚಿಣ್ಣಪ್ಪ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ಪ್ರತಿಭೆ ತ್ರಿಶೂಲ್‌ ಚಿಣ್ಣಪ್ಪ ಇಲ್ಲಿ ಆರಂಭವಾದ ಟಾಟಾ ಸ್ಟೀಲ್‌ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಚಾಂಪಿಯ­ನ್‌ಷಿಪ್‌ನ ಮೊದಲ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಲು ತ್ರಿಶೂಲ್‌ 69 ಅವಕಾಶಗಳನ್ನು ಬಳಸಿಕೊಂಡರು.

ವಶಿಷ್ಠ ಪವಾರ್‌ (70) ಎರಡನೇ ಸ್ಥಾನದಲ್ಲಿದ್ದಾರೆ. ತಲಾ 71 ಅವಕಾಶ­ಗಳನ್ನು ಬಳಸಿಕೊಂಡ ಉದಯನ್‌ ಮಾನೆ, ನಿಖಿಲ್‌ ಎಸ್‌. ಶೇಖಾವತ್‌ ಮತ್ತು ಅಮನ್‌ ರಾಜ್‌ ಜಂಟಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿ­ದ್ದಾರೆ. ಸೈಯದ್‌ ಸಕೀಬ್‌ ಮತ್ತು ಕರಣ್‌ ಮೊದಲ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಬ್ಬರೂ ಕ್ರಮವಾಗಿ 75 ಹಾಗೂ 77 ಅವಕಾ­ಶಗಳನ್ನು ಬಳಸಿಕೊಂಡರು.

ಪ್ರಶ­ಸ್ತಿಯ ಕನಸು ಜೀವಂತವಾಗಿ­ರಿಸಿಕೊಳ್ಳಬೇ­ಕಾ­ದರೆ ಇಬ್ಬರೂ ಎರಡನೇ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT