ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು

Last Updated 29 ಮಾರ್ಚ್ 2011, 8:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ಭಾನುವಾರ ರಾತ್ರಿ ಇಲ್ಲಿನ ರಥ ಮೈದಾನದಲ್ಲಿ ನಡೆದ ಬಸವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಗಾಯಕಿ ಗೀತಾ ಜಾವಡೇಕರ್ ಅವರು ಗಾಯನ ಪ್ರಸ್ತುತಪಡಿಸಿ ಪ್ರೇಕ್ಷಕರು ತಲೆದೂಗುವಂತೆ ಮಾಡಿದರು.
 

ತಾವು ಧಾರವಾಡದವರಾಗಿದ್ದು 25 ವರ್ಷದ ಹಿಂದೆ ಶರಣರ ನಾಡು ಬಸವಕಲ್ಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ ಎಂದು ನೆನಪು ಮಾಡಿಕೊಂಡರು. ‘ಜಯಗುರು ಬಸವ, ಬಸವ ಶಿವನೇ, ಶಿವನೇ ಬಸವಾ’ ಎಂಬ ಸ್ತುತಿಗೀತೆ ಹಾಡಿ ಜನರಲ್ಲಿ ಉತ್ಸಾಹ ತುಂಬಿದರು. ವಚನ ಹಾಗೂ ಭಕ್ತಿಗೀತೆಗಳನ್ನು ಸಹ ಅವರು ಹಾಡಿದರು.
 

ಇದಕ್ಕೂ ಮೊದಲು ಭಾಲ್ಕಿಯ ಸುವರ್ಣ ರಾಠೋಡ ವಚನಗಳನ್ನು ಹಾಡಿದರು. ರಾಣಿ ಸತ್ಯಮೂರ್ತಿ ಮತ್ತು ಸಂಗಡಿಗರು ವಚನ ನೃತ್ಯ ಹಾಗೂ ಹಳ್ಳಿಖೇಡ ಬಸವತೀರ್ಥ ವಿದ್ಯಾಪೀಠದ ಮಕ್ಕಳು, ಬೆಂಗಳೂರಿನ ವಿವೇಕಾನಂದ ಕೇಂದ್ರದ ಯುವಕರಿಂದ ಆಕರ್ಷಕ ನೃತ್ಯ ಪ್ರದರ್ಶಿಸಲಾಯಿತು. ಶ್ರೀನಿವಾಸ ಮತ್ತು ರಶ್ಮಿ ನಿರೂಪಿಸಿದರು. ಅಪಾರ ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT